ಉಡುಪಿ: ಉಡುಪಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಸೇರಿದ ವಿವಿಧ ಪ್ರದೇಶಗಳಿಗೆ ಸೇರಿದ 10 ಮಂದಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಇಂದು ಉಡುಪಿ ತಾಲೂಕು ಕಚೇರಿ ಬಳಿಯ ಕೆನರಾ ಟವರ್ಸ್ ನಲ್ಲಿರುವ ಜೆಡಿಎಸ್ ಪಕ್ಷದ ಉಡುಪಿ ಬ್ಲಾಕ್ ಕಚೇರಿಯ ಸಭಾಂಗಣದಲ್ಲಿ ನಡೆಸ ಸರಳ ಸಮಾರಂಬದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಮಾಜಿ ಶಾಸಕ ಯು.ಆರ್ ಸಭಾಪತಿ ಹಾಗೂ ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ಗುಲಾಂ ಮೊಹಮ್ಮದ್ ಇವರು ಪಕ್ಷದ ಬಾವುಟವನ್ನು ನೂತನ ಕಾರ್ಯಕರ್ತರಿಗೆ ಹಸ್ತಾಂತರಿಸುವ ಮೂಲಕ ಪಕ್ಷಕ್ಕೆ ಬರಮಾಡಿಕೊಂಡರು.
ಯುವ ಜೆಡಿಎಸ್ ಜಿಲ್ಲಾಧ್ಯಕ್ಷ ವಾಸುದೇವ ರಾವ್, ಕಾರ್ಯಾಧ್ಯಕ್ಷ ಸುರೇಶ್ ಸುವರ್ಣ, ನೇಕಾರರ ಘಟಕದ ಜಿಲ್ಲಾಧ್ಯಕ್ಷ ದಿವಾಕರ ಸಾಲಿಯಾನ್, ಅಲ್ಪಸಂಖ್ಯಾತ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್.ಬಿ.ಉಮ್ಮರ್ ಫಾರೂಕ್, ಉಡುಪಿ ಬ್ಲಾಕ್ ಅಧ್ಯಕ್ಷ ಜಯಕುಮಾರ್ ಪರ್ಕಳ, ಕಾರ್ಯದರ್ಶಿ ಮುಹಮ್ಮದ್ ಮಾರ್ಪು, ಮಾಜಿ ತಾ.ಪಂ.ಸದಸ್ಯ ವಸಂತ ಮರ್ಣೆ, ಶೇಖ್ ಅಹಮ್ಮದ್ ಪಡುಬಿದ್ರಿ, ಶ್ರೀಮತಿ ಸುನಿತಾ ಲೋಕನಾಥ ಕೋಟ್ಯಾನ್ ಕೀಳಿಂಜೆ ಹಾಗೂ ಹರೀಶ್ ಕೋಟ್ಯಾನ್ ಕೀಳಿಂಜೆ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಶಶಿಧರ ಅಮೀನ್ ವಡಭಾಂಡೇಶ್ವರ, ಶ್ರೀಮತಿ ಚಂದ್ರಾವತಿ ಕೊಡವೂರು, ಪ್ರಭಾಕರ ಆಚಾರಿ ಬಡಾನಿಡಿಯೂರು, ಸುರೇಶ್ ಕೋಟ್ಯಾನ್, ಶ್ರೀಧರ ಆಚಾರ್ಯ ಗರಡಿಮಜಲು, ಶಶಿಧರ ಗರಡಿಮಜಲು, ಶಶಿಕುಮಾರ್ ಗರಡಿಮಜಲು, ಸುರೇಶ್ ವಡಭಾಂಡೇಶ್ವರ, ಶೇಖರ ಅಮೀನ್ ವಡಭಾಂಡೇಶ್ವರ ಹಾಗೂ ಹರೀಶ್ ವಡಭಾಂಡೇಶ್ವರ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
- 12 jana jds ge
- gulam bhashana
- jayakumar bhashana
- vasudev rao bhashana
- dilesh bellampalli3
- balakrishna m compound1







