Posts Tagged ‘rave party’

ಉಡುಪಿ: ರಾಜ್ಯದ 224 ಮಂದಿ ಶಾಸಕರಲ್ಲಿ ಒಂದೇ ಒಂದು ದಿನ ಎದ್ದು ನಿಂತು ಚಕಾರ ಶಬ್ದ ಮಾತನಾಡದ ಏಕೈಕ ಶಾಸಕರಿದ್ದರೆ, ಅದು ಕಾಪು ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಲಾಲಾಜಿ ಆರ್.ಮೆಂಡನ್ ಅವರು. ಇವರಿಗೆ ಇದಕ್ಕಾಗಿ ಬಿರುದು ಕೊಡಬಹುದು ಎಂದು ಮಾಜಿ ಸಚಿವ, ಕಾಂಗ್ರೆಸ್ ನಾಯಕ ವಸಂತ ವಿ.ಸಾಲ್ಯಾನ್ ವ್ಯಂಗ್ಯವಾಡಿದ್ದಾರೆ.
ಮಲ್ಪೆ ಸೈಂಟ್ ಮೇರೀಸ್ ಐಲ್ಯಾಂಡ್ ನಲ್ಲಿ ನಡೆದ ರೇವ್ ಪಾರ್ಟಿಗೆ ಅವಕಾಶ ಮಾಡಿಕೊಟ್ಟ ಉಡುಪಿಯ ಬಿಜೆಪಿ ಶಾಸಕ ರಘುಪತಿ ಭಟ್ ಹಾಗೂ ಸದನದಲ್ಲಿ ಬ್ಲೂಫಿಲಂ ವೀಕ್ಷಿಸಿದ ಮೂವರು ಬಿಜೆಪಿ ಸಚಿವರ ವರ್ತನೆಯನ್ನು ಖಂಡಿಸಿ ಕಾಪು ಬ್ಲಾಕ್ ನ ಕಾಂಗ್ರೆಸ್, ಯುವ ಕಾಂಗ್ರೆಸ್ ಮತ್ತು ಮಹಿಳಾ ಕಾಂಗ್ರೆಸ್ ಜಂಟಿಯಾಗಿ ಹಿರಿಯಡ್ಕ ಬಸ್ ನಿಲ್ದಾಣದಲ್ಲಿ ನಡೆಸಿದ ಬಹಿರಂಗ ಪ್ರತಿಭಟನಾ ಧರಣಿಯಲ್ಲಿ ಅವರು ಮಾತನಾಡುತ್ತಿದ್ದರು.

ಕಾಂಗ್ರೆಸ್ ಆಡಳಿತವಿರುವ ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ಗಳಿಗೆ ರಾಜ್ಯ ಸರಕಾರ ಅಭಿವೃದ್ದಿಗಾಗಿ ಅನುದಾನವನ್ನೇ ಬಿಡುಗಡೆ ಮಾಡದೆ ಪಕ್ಷಪಾತ ಮಾಡುತ್ತಿದೆ. ಕಾಂಗ್ರೆಸ್ ಪಕ್ಷ ಆಡಳಿತದಲ್ಲಿದ್ದಾಗ ಹೀಗೆ ಮಾಡುತ್ತಿರಲಿಲ್ಲ ಎಂದು ಸಾಲ್ಯಾನ್ ಹೇಳಿದರು.

1994 ರಲ್ಲಿ ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ತಾನು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದೆ. ಅಂದು ರೂಪಿಸಿದ ನಿಯಮಾವಳಿಗಳ ಪ್ರಕಾರ ಸೈಂಟ್ ಮೇರೀಸ್ ಐಲ್ಯಾಂಡ್ ನಲ್ಲಿ ಸಂಜೆ ಗಂಟೆ 5 ರ ಬಳಿಕ ಯಾರೊಬ್ಬರೂ ಅಲ್ಲಿ ನಿಲ್ಲುವಂತೆಯೇ ಇರಲಿಲ್ಲ, ಮದ್ಯ ಇತ್ಯಾದಿಗಳನ್ನು ಅಲ್ಲಿ ಕುಡಿಯುಂತಿರಲಿಲ್ಲ. ಆದರೆ ಇದೀಗ ಮದ್ಯ, ಗಾಂಜಾ, ಚರಸ್ ಸಹಿತ ಏನೇನು ಬೇಕೋ ಅದೆಲ್ಲವನ್ನೂ ಐಲ್ಯಾಂಡ್ ಗೆ ಸರಬರಾಜು ಮಾಡಲಾಗಿದೆ. ಇದೆಲ್ಲಾ ಹೇಗೆ ಸಾಧ್ಯವಾಯಿತು, ಯಾರಿದಕ್ಕೆ ಹೊಣೆ ಎಂದು ವಸಂತ ಸಾಲ್ಯಾನ್ ಪ್ರಶ್ನಿಸಿದರು.

ಶಾಸಕ ರಘುಪತಿ ಭಟ್ ಅವರು ನಂಗಾನಾಚ್ ನಲ್ಲಿ ತೊಡಗಿದ್ದ ವಿದೇಶಿ ಜೋಡಿ ಜೊತೆ ಡ್ಯಾನ್ಸ್ ಮಾಡುತ್ತಿದ್ದರು. ಇದನ್ನೆಲ್ಲಾ ಮುಖ್ಯಮಂತ್ರಿ ಸದಾನಂದ ಗೌಡರು ಸಮರ್ಥಿಸುತ್ತಾರೆ. ಇವರಿಗೆಲ್ಲ ಜನರು ಧಿಕ್ಕಾರ ಹೇಳಬೇಕು ಎಂದ ಸಾಲ್ಯಾನ್, ಸದನದಲ್ಲಿ ಬ್ಲೂಫಿಲಂ ವೀಕ್ಷಿಸಿ ಸಿಕ್ಕಿಬಿದ್ದ ಮೂವರನ್ನೂ ಶಾಕತ್ವದಿಂದ ವಜಾ ಮಾಡಬೇಕು ಎಂದು ಸ್ಫೀಕರ್ ಅವರನ್ನು ಒತ್ತಾಯಿಸಿದರು.

ಕೆಪಿಸಿಸಿ ಕಾರ್ಯದರ್ಶಿ ಎಂ.ಎ.ಗಫೂರ್, ಅಮೃತ್ ಶೆಣೈ, ಸುಧೀರ್ ಹೆಗ್ಡೆ, ರಮೇಶ್ ಕಾಂಚನ್, ಇಸ್ಮಾಯಿಲ್ ಆತ್ರಾಡಿ, ಲಕ್ಷ್ಮೀ ನಾರಾಯಣ ಪ್ರಭು, ಅಬ್ದುಲ್ ಅಜೀಜ್ ಹೆಜಮಾಡಿ, ಮಿಥುನ್, ಸಂಧ್ಯಾ ಶೆಟ್ಟಿ, ಸುಧಾಕರ ಪೂಜಾರಿ ಪಾಪೂಜೆ, ಹಬೀಬ್ ಅಲಿ, ಪ್ರವೀಣ್ ಶೆಟ್ಟಿ, ಅಲೆವೂರು ಹರೀಶ್ ಕಿಣಿ, ರಿಯಾಝ್ ಪಳ್ಳಿ, ನರೇಶ್ ಕಾಮತ್, ಶಿವರಾಮ ಶೆಟ್ಟಿ ಕುದಿ, ವಿನೋದ್ ಕುಮಾರ್, ಸುಂದರ ಪೂಜಾರಿ, ಸಂತೋಷ್, ರಾಜು ಪೂಜಾರಿ, ಸಂತೋಷ್ ಶೆಟ್ಟಿ, ಸುರೇಶ್ ನಾಯ್ಕ ಮೊದಲಾದವರು ಉಪಸ್ಥಿತರಿದ್ದರು.

ಉಡುಪಿ: ರಾಜ್ಯದ 224 ಮಂದಿ ಶಾಸಕರಲ್ಲಿ ಒಂದೇ ಒಂದು ದಿನ ಎದ್ದು ನಿಂತು ಚಕಾರ ಶಬ್ದ ಮಾತನಾಡದ ಏಕೈಕ ಶಾಸಕರಿದ್ದರೆ, ಅದು ಕಾಪು ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಲಾಲಾಜಿ ಆರ್.ಮೆಂಡನ್ ಅವರು. ಇವರಿಗೆ ಇದಕ್ಕಾಗಿ ಬಿರುದು ಕೊಡಬಹುದು ಎಂದು ಮಾಜಿ ಸಚಿವ, ಕಾಂಗ್ರೆಸ್ ನಾಯಕ ವಸಂತ ವಿ.ಸಾಲ್ಯಾನ್ ವ್ಯಂಗ್ಯವಾಡಿದ್ದಾರೆ.
ಮಲ್ಪೆ ಸೈಂಟ್ ಮೇರೀಸ್ ಐಲ್ಯಾಂಡ್ ನಲ್ಲಿ ನಡೆದ ರೇವ್ ಪಾರ್ಟಿಗೆ ಅವಕಾಶ ಮಾಡಿಕೊಟ್ಟ ಉಡುಪಿಯ ಬಿಜೆಪಿ ಶಾಸಕ ರಘುಪತಿ ಭಟ್ ಹಾಗೂ ಸದನದಲ್ಲಿ ಬ್ಲೂಫಿಲಂ ವೀಕ್ಷಿಸಿದ ಮೂವರು ಬಿಜೆಪಿ ಸಚಿವರ ವರ್ತನೆಯನ್ನು ಖಂಡಿಸಿ ಕಾಪು ಬ್ಲಾಕ್ ನ ಕಾಂಗ್ರೆಸ್, ಯುವ ಕಾಂಗ್ರೆಸ್ ಮತ್ತು ಮಹಿಳಾ ಕಾಂಗ್ರೆಸ್ ಜಂಟಿಯಾಗಿ ಹಿರಿಯಡ್ಕ ಬಸ್ ನಿಲ್ದಾಣದಲ್ಲಿ ನಡೆಸಿದ ಬಹಿರಂಗ ಪ್ರತಿಭಟನಾ ಧರಣಿಯಲ್ಲಿ ಅವರು ಮಾತನಾಡುತ್ತಿದ್ದರು.
ಕಾಂಗ್ರೆಸ್ ಆಡಳಿತವಿರುವ ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ಗಳಿಗೆ ರಾಜ್ಯ ಸರಕಾರ ಅಭಿವೃದ್ದಿಗಾಗಿ ಅನುದಾನವನ್ನೇ ಬಿಡುಗಡೆ ಮಾಡದೆ ಪಕ್ಷಪಾತ ಮಾಡುತ್ತಿದೆ. ಕಾಂಗ್ರೆಸ್ ಪಕ್ಷ ಆಡಳಿತದಲ್ಲಿದ್ದಾಗ ಹೀಗೆ ಮಾಡುತ್ತಿರಲಿಲ್ಲ ಎಂದು ಸಾಲ್ಯಾನ್ ಹೇಳಿದರು.
1994 ರಲ್ಲಿ ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ತಾನು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದೆ. ಅಂದು ರೂಪಿಸಿದ ನಿಯಮಾವಳಿಗಳ ಪ್ರಕಾರ ಸೈಂಟ್ ಮೇರೀಸ್ ಐಲ್ಯಾಂಡ್ ನಲ್ಲಿ ಸಂಜೆ ಗಂಟೆ 5 ರ ಬಳಿಕ ಯಾರೊಬ್ಬರೂ ಅಲ್ಲಿ ನಿಲ್ಲುವಂತೆಯೇ ಇರಲಿಲ್ಲ, ಮದ್ಯ ಇತ್ಯಾದಿಗಳನ್ನು ಅಲ್ಲಿ ಕುಡಿಯುಂತಿರಲಿಲ್ಲ. ಆದರೆ ಇದೀಗ ಮದ್ಯ, ಗಾಂಜಾ, ಚರಸ್ ಸಹಿತ ಏನೇನು ಬೇಕೋ ಅದೆಲ್ಲವನ್ನೂ ಐಲ್ಯಾಂಡ್ ಗೆ ಸರಬರಾಜು ಮಾಡಲಾಗಿದೆ. ಇದೆಲ್ಲಾ ಹೇಗೆ ಸಾಧ್ಯವಾಯಿತು, ಯಾರಿದಕ್ಕೆ ಹೊಣೆ ಎಂದು ವಸಂತ ಸಾಲ್ಯಾನ್ ಪ್ರಶ್ನಿಸಿದರು.
ಶಾಸಕ ರಘುಪತಿ ಭಟ್ ಅವರು ನಂಗಾನಾಚ್ ನಲ್ಲಿ ತೊಡಗಿದ್ದ ವಿದೇಶಿ ಜೋಡಿ ಜೊತೆ ಡ್ಯಾನ್ಸ್ ಮಾಡುತ್ತಿದ್ದರು. ಇದನ್ನೆಲ್ಲಾ ಮುಖ್ಯಮಂತ್ರಿ ಸದಾನಂದ ಗೌಡರು ಸಮರ್ಥಿಸುತ್ತಾರೆ. ಇವರಿಗೆಲ್ಲ ಜನರು ಧಿಕ್ಕಾರ ಹೇಳಬೇಕು ಎಂದ ಸಾಲ್ಯಾನ್, ಸದನದಲ್ಲಿ ಬ್ಲೂಫಿಲಂ ವೀಕ್ಷಿಸಿ ಸಿಕ್ಕಿಬಿದ್ದ ಮೂವರನ್ನೂ ಶಾಕತ್ವದಿಂದ ವಜಾ ಮಾಡಬೇಕು ಎಂದು ಸ್ಫೀಕರ್ ಅವರನ್ನು ಒತ್ತಾಯಿಸಿದರು.
ಕೆಪಿಸಿಸಿ ಕಾರ್ಯದರ್ಶಿ ಎಂ.ಎ.ಗಫೂರ್, ಅಮೃತ್ ಶೆಣೈ, ಸುಧೀರ್ ಹೆಗ್ಡೆ, ರಮೇಶ್ ಕಾಂಚನ್, ಇಸ್ಮಾಯಿಲ್ ಆತ್ರಾಡಿ, ಲಕ್ಷ್ಮೀ ನಾರಾಯಣ ಪ್ರಭು, ಅಬ್ದುಲ್ ಅಜೀಜ್ ಹೆಜಮಾಡಿ, ಮಿಥುನ್, ಸಂಧ್ಯಾ ಶೆಟ್ಟಿ, ಸುಧಾಕರ ಪೂಜಾರಿ ಪಾಪೂಜೆ, ಹಬೀಬ್ ಅಲಿ, ಪ್ರವೀಣ್ ಶೆಟ್ಟಿ, ಅಲೆವೂರು ಹರೀಶ್ ಕಿಣಿ, ರಿಯಾಝ್ ಪಳ್ಳಿ, ನರೇಶ್ ಕಾಮತ್, ಶಿವರಾಮ ಶೆಟ್ಟಿ ಕುದಿ, ವಿನೋದ್ ಕುಮಾರ್, ಸುಂದರ ಪೂಜಾರಿ, ಸಂತೋಷ್, ರಾಜು ಪೂಜಾರಿ, ಸಂತೋಷ್ ಶೆಟ್ಟಿ, ಸುರೇಶ್ ನಾಯ್ಕ ಮೊದಲಾದವರು ಉಪಸ್ಥಿತರಿದ್ದರು.

ಉಡುಪಿ: ರಾಜ್ಯ ಸಚಿವ ಸಂಪುಟದಲ್ಲಿರುವ ರೇಣುಕಾಚಾರ್ಯ ಒಬ್ಬ ನೀಚ. ಈತ ಬಿಜೆಪಿಯ ನಿಜವಾದ ಮುಖ. ಈತನ ಬಗ್ಗೆ ಸಾಕ್ಷ್ಯ ಚಿತ್ರ ತಯಾರಿಸಲು ನಿರ್ಧರಿಸಿದ್ದೇನೆ ಎಂದು ಜೆಡಿಎಸ್ ನಾಯಕ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಮಹೇಂದ್ರ ಕುಮಾರ್ ತಿಳಿಸಿದ್ದಾರೆ.
ಉಡುಪಿಯ ಜೆಡಿಎಸ್ ಕಚೇರಿಯಲ್ಲಿ ಕರೆದ ಮಾಧ್ಯಮಗೋಷ್ಟಿಯಲ್ಲಿ ಅವರು ಮಾತನಾಡುತ್ತಿದ್ದರು. ಸಂಘ ಪರಿವಾರದ ಪ್ರಚೋದನೆಯಿಂದ, ಬಿಜೆಪಿಯ ನೇತೃತ್ವದಲ್ಲಿ ಮಲ್ಪೆಯ ಸೈಂಟ್ ಮೇರೀಸ್ ಐಲ್ಯಾಂಡ್ ನಲ್ಲಿ ರೇವ್ ಪಾರ್ಟಿ ನಡೆದಿದೆ. ಜಿಲ್ಲಾ ಉಸ್ತುವಾರಿ ಸಚಿವ ಡಾ.ವಿ.ಎಸ್.ಆಚಾರ್ಯರ ಪರೋಕ್ಷ ಬೆಂಬಲ ಇದಕ್ಕಿತ್ತು. ಇಲ್ಲದಿದ್ದಲ್ಲಿ ಜಿಲ್ಲಾಧಿಕಾರಿಗಳು ಇಷ್ಟೊಂದು ಆಸಕ್ತಿಯಲ್ಲಿ ರೇವ್ ಪಾರ್ಟಿಯನ್ನು ನಿರ್ವಹಿಸುತ್ತಿರಲಿಲ್ಲ ಎಂದು ಮಾಜಿ ಸಂಘ ಪರಿವಾರದ ನಾಯಕ ಮಹೇಂದ್ರ ಕುಮಾರ್ ಹೇಳಿದ್ದಾರೆ.
ರೇವ್ ಪಾರ್ಟಿ ಬಗ್ಗೆ ಆರ್ಎಸ್ಎಸ್ ಯಾಕೆ ಮೌನ ವಹಿಸಿದೆ ?, ವಿಶ್ವ ಹಿಂದೂ ಪರಿಷತ್ ಯಾಕೆ ಜಾಣ ಕಿವುಡು ಪ್ರದರ್ಶಿಸುತ್ತಿದೆ ?, ಬಜರಂಗ ದಳ ಯಾಕೆ ಸುಮ್ನೆ ಕುಳಿತಿದೆ ?, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಯಾಕೆ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿಲ್ಲವೆಂದು ಬಜರಂಗ ದಳದ ಮಾಜಿ ರಾಜ್ಯ ಸಂಚಾಲಕ ಮಹೇಂದ್ರ ಕುಮಾರ್ ಪ್ರಶ್ನಿಸಿದ್ದಾರೆ.
ಸಂಘ ಪರಿವಾರದಲ್ಲಿರುವ ಪ್ರಾಮಾಣಿಕರಿಗೆ ಬಿಜೆಪಿ ಜೊತೆ ಗುರುತಿಸಿಕೊಳ್ಳೋಕೆ ನಾಚಿಕೆ ಇದೆ. ಇವರೆಲ್ಲ ತನ್ನ ಹೋರಾಟವನ್ನು ಬೆಂಬಲಿಸುತ್ತಿದ್ದಾರೆ ಎಂದಿರುವ ಮಹೇಂದ್ರ, ತಾನೊಂದು ಪುಸ್ತಕ ಬರೆಯುತ್ತಿದ್ದು ಇದು ಇನ್ನು 3 ತಿಂಗಳಲ್ಲಿ ಬಿಡುಗಡೆಗೊಳ್ಳಲಿದೆ ಎಂದು ತಿಳಿಸಿದರು.
ಪಕ್ಷವನ್ನು ಕಟ್ಟಿ ಬೆಳೆಸುವ ಉದ್ದೇಶದೊಂದಿಗೆ ನಾಡಿನೆಲ್ಲೆಡೆ ಯುವ ಜನ ಜಾಗೃತಿ ಸಭೆ, ಯುವ ಸಮಾವೇಶ ಹಮ್ಮಿಕೊಳ್ಳಲಾಗಿದೆ. ದ.ಕ ಮತ್ತು ಉಡುಪಿ ಜಿಲ್ಲೆಯ 800 ಕಡೆಗಳಲ್ಲಿ ಗ್ರಾಮ ಮಟ್ಟದಲ್ಲಿ ಆಯೋಜಿಸಲಾಗಿದೆ. ಇದೀಗ ಗ್ರಾಮ ಯಾತ್ರೆ ನಡೆಯುತ್ತಿದೆ. ಎಲ್ಲೆಡೆಗಳಲ್ಲೂ ಸಮಾಜವನ್ನು ಬಿಜೆಪಿಯಿಂದ ಕಾಪಾಡಿ ಎಂಬ ಘೋಷಣೆಯೊಂದಿಗೆ ಸಭೆಗಳು ನಡೆಯಲಿದೆ. ಇಲ್ಲೆಲ್ಲಾ ಬಹುಮುಖ ವ್ಯಾಘ್ರತೆಯಿಂದ ಕೂಡಿದ ಬಿಜೆಯ ನಿಜ ಬಣ್ಣವನ್ನು ಸಾರ್ವಜನಿಕರೆದುರು ಬಯಲುಮಾಡಲಾಗುವುದು ಎಂದು ಮಹೇಂದ್ರ ಕುಮಾರ್ ವಿವರ ನೀಡಿದರು.
ಸಚಿವರು ಬ್ಲೂಫಿಲಂ ವೀಕ್ಷಿಸುತ್ತಿದ್ದಾಗ ಮಾಧ್ಯಮಗಳ ಕೈಗೆ ರೆಡ್ ಹ್ಯಾಂಡಾಗಿ ಸಿಕ್ಕಿ ಬಿದ್ದಿದ್ದಾರೆ. ಇನ್ಯಾಕೆ ತನಿಖೆ ಎಂದು ಪ್ರಶ್ನಿಸಿದ ಮಹೇಂದ್ರ ಕುಮಾರ್, ಆರೋಪಿಗಳನ್ನು ಬಚಾವ್ ಮಾಡಲು ತನಿಖೆ ಎಂಬ ನಾಟಕವನ್ನು ನಡೆಸಲಾಗುತ್ತಿದೆ ಎಂದರು.
ಸಂಘ ಪರಿವಾರದಲ್ಲಿರುವ ಪ್ರಾಮಾಣಿಕರಿಗೆ ಬಿಜೆಪಿ ಜೊತೆ ಗುರುತಿಸಿಕೊಳ್ಳೋಕೆ ನಾಚಿಕೆ ಇದೆ. ಇವರೆಲ್ಲ ತನ್ನ ಹೋರಾಟವನ್ನು ಬೆಂಬಲಿಸುತ್ತಿದ್ದಾರೆ ಎಂದಿರುವ ಮಹೇಂದ್ರ, ತಾನೊಂದು ಪುಸ್ತಕ ಬರೆಯುತ್ತಿದ್ದು ಇದು ಇನ್ನು 3 ತಿಂಗಳಲ್ಲಿ ಬಿಡುಗಡೆಗೊಳ್ಳಲಿದೆ ಎಂದು ತಿಳಿಸಿದರು.
ಮಾಧ್ಯಮಗೋಷ್ಟಿಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ಕಾರ್ಯಾಧ್ಯಕ್ಷ ಗುಲಾಂ ಮುಹಮ್ಮದ್, ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಲೂಯಿಸ್ ಲೋಬೊ ಹಾಗೂ ಯುವ ಜೆಡಿಎಸ್ ರಾಜ್ಯ ಕಾರ್ಯದರ್ಶಿ ಬೆಳ್ಳಂಪಳ್ಳಿ ದಿಲೇಶ್ ಶೆಟ್ಟಿ ಉಪಸ್ಥತರಿದ್ದರು.

ಉಡುಪಿ: ಟೆಬ್ಮಾ ಶಿಪ್ ಯಾರ್ಡ್ ನಿಂದ ಶಾಸಕ ಕೆ.ರಘುಪತಿ ಭಟ್ಟರ ಪರಿವಾರ್ ಟ್ರಸ್ಟ್ ಗೆ 10 ಲಕ್ಷ ರು. ಹಣ ಚೆಕ್ ರೂಪದಲ್ಲಿ ಅಧಿಕೃತವಾಗಿ ಪಾವತಿಯಾಗಿದೆ. ಅನಧಿಕೃತವಾಗಿ ಯಾರಿಂದ ಎಷ್ಟು ಹಣ ನಗದು ರೂಪದಲ್ಲಿ ಪಡೆದುಕೊಂಡಿದ್ದಾರೆ ಎಂದು ಭಟ್ಟರೇ ಹೇಳಬೇಕು ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಮೋದ್ ಮಧ್ವರಾಜ್ ಅವರು ನೇರವಾಗಿ ಗಂಭೀರ ಆರೋಪ ಮಾಡಿದ್ದಾರೆ.
ಶುಕ್ರವಾರ ರಘುಪತಿ ಭಟ್ಟರು ಮಾಧ್ಯಮಗೋಷ್ಟಿ ಕರೆದು ಪ್ರಮೋದ್ ಮಧ್ವರಾಜ್ ಮೇಲೆ ಆರೋಪ ಮಾಡಿದ್ದಕ್ಕೆ ಪ್ರತಿಯಾಗಿ ಶನಿವಾರ ಪ್ರಮೋದ್ ಮಧ್ವರಾಜ್ ಮಾಧ್ಯಮಗೋಷ್ಟಿ ಕರೆದು ಭಟ್ಟರಿಗೆ ತಿರುಗೇಟು ನೀಟಿದರು. ಈ ಸಂದರ್ಭದಲ್ಲಿ ಆರೋಪಗಳಿಗೆ ಸಂಬಂಧಿಸಿದಂತೆ ಸಾಕ್ಷ್ಯವಾಗಿ 17 ಪುಟಗಳ ದಾಖಲಾತಿಗಳನ್ನು ಮಾಧ್ಯಮದವರಿಗೆ ಪ್ರಮೋದ್ ನೀಡಿದರು.
ಬೆಂಗಳೂರಿನಲ್ಲಿ ಮಂತ್ರಿಗಳು, ಬಿಜೆಪಿ ನಾಯಕರು ಮಾಡಿದಂತೆ ಉಡುಪಿಯಲ್ಲಿ ಶಾಸಕ ಭಟ್ಟರು ಅಕ್ರಮವಾಗಿ ಹಲವು ಡಿನೋಟಿಫಿಕೇಶನ್ ಮಾಡಿದ್ದಾರೆ. ಇದರ ವಿರುದ್ದ ಶೀಘ್ರವೇ ಲೋಕಾಯುಕ್ತಕ್ಕೆ ದೂರು ನೀಡಲಾಗುವುದು ಎಂದು ಪ್ರಮೋದ್ ತಿಳಿಸಿದರು.
ವಿವಿಧ ಉತ್ಸವಗಳ ಹೆಸರಲ್ಲಿ ಗುತ್ತಿಗೆದಾರರಿಂದ ಭಟ್ಟರು ಲಕ್ಷಾಂತರ ರು. ಹಣವನ್ನು ಪಡೆದಿದ್ದಾರೆ. ಅನೈತಿಕವಾಗಿ ಹಣ ಸಂಗ್ರಹಿಸುವುದನ್ನು ಭಟ್ಟರು ದಂಧೆಯನ್ನಾಗಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ ಪ್ರಮೋದ್, 2005-06 ರಲ್ಲಿ ಭಟ್ಟರ ಆದಾಯ 3,10,000 ರು. ಇತ್ತು. ಇದೀಗ ಈ ಮೊತ್ತ ಹಲವು ಕೋಟಿ ರು. ಗೂ ಮೀರಿದೆ ಎಂದು ಅಪಾದಿಸಿದರು.
ವಿರೋಧ ಪಕ್ಷದಲ್ಲಿದ್ದಾಗ ನಾಗಾರ್ಜುನ (ಯುಪಿಸಿಎಲ್) ವಿರೋಧಿಸಿ ಭಟ್, ಲಾಲಾಜಿ ಮೆಂಡನ್, ಡಾ.ವಿ.ಎಸ್.ಆಚಾರ್ಯ, ಸದಾನಂದ ಗೌಡರು ಇದೀಗ ನಾಗಾರ್ಜುನದ ಬೆಂಬಲಿಗರಾಗಿದ್ದಾರೆ. ಇದು ಹೇಗೆ ಎಂದು ಪ್ರಶ್ನಿಸಿದ ಪ್ರಮೋದ್ ಮಧ್ವರಾಜ್, ಮಲ್ಪೆಯ ಸೈಂಟ್ ಮೇರೀಸ್ ಐಲ್ಯಾಂಡ್ ನಲ್ಲಿ ನಡೆದ ರೇವ್ ಪಾರ್ಟಿ ಜೊತೆಗೆ ಭಟ್ಟರಿಗೆ ಗಾಢವಾದ ಸಂಬಂಧವಿದೆ ಎಂದು ದೂರಿದರು.
ಮಾಧ್ಯಮಗೋಷ್ಟಿಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕರುಗಳಾದ ಕಿಶನ್ ಹೆಗ್ಡೆ ಕೊಳ್ಕೆಬೈಲ್, ದಿನೇಶ್ ಪುತ್ರನ್, ಅಮೃತ್ ಶೆಣೈ, ಕೆ.ಜನಾರ್ದನ ಭಂಡಾರ್ಕರ್, ಅಶೋಕಕುಮಾರ್ ಕೊಡವೂರು, ನರಸಿಂಹಮೂರ್ತಿ, ಅಲೆವೂರು ಹರೀಶ್ ಕಿಣಿ, ಭಾಸ್ಕರ ರಾವ್ ಕಿದಿಯೂರು, ಜನಾರ್ದನ ತೋನ್ಸೆ, ಯತೀಶ್ ಕರ್ಕೇರ, ಕೀರ್ತಿ ಶೆಟ್ಟಿ, ಯಜ್ನೇಶ್ ಆಚಾರ್ಯ, ಮಿಥುನ್, ಓಬು, ದಿವಾಕರ ಕುಂದರ್, ಪ್ರಖ್ಯಾತ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ವರದಿ: ಶ್ರೀರಾಮ ದಿವಾಣ.

ಉಡುಪಿ: ಮಲ್ಪೆ ಸೈಂಟ್ ಮೇರೀಸ್ ಐಲ್ಯಾಂಡ್ ನಲ್ಲಿ ಶಾಸಕ ರಘುಪತಿ ಭಟ್ಟರ ಕುಮ್ಮಕ್ಕಿನಿಂದಲೇ ನಂಗಾನಾಚ್ ನಡೆದಿದೆ. ಸಚಿವರಾದ ಹಾಲಪ್ಪ, ರೇಣುಕಾಚಾರ್ಯರ ಬಳಿಕ ಇದೀಗ ಮೂವರು ಸಚಿವರು ಸದನದಲ್ಲಿಯೇ ಬ್ಲೂಫಿಲಂ ವೀಕ್ಷಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದಾರೆ. ರಾಜ್ಯದ ಬಿಜೆಪಿ ಸರಕಾರದ ಸಚಿವ ಸಂಪುಟ ಒಂದು ಲಂಪಟರ ಸಚಿವ ಸಂಪುಟ ಎಂದು ಜಮಾತೆ- ಇ- ಇಸ್ಲಾಮೀ ಹಿಂದ್ ನ ಸಲಹಾ ಸಮಿತಿ ಸದಸ್ಯ ಮುಹಮ್ಮದ್ ಇದ್ರೀಸ್ ಅವರು ವ್ಯಂಗ್ಯವಾಡಿದ್ದಾರೆ.
ಸಚಿವರು ಸದನದಲ್ಲಿ ಬ್ಲೂಫಿಲಂ ವೀಕ್ಷಿಸಿದ್ದನ್ನು ಮತ್ತು ಮಲ್ಪೆಯಲ್ಲಿ ರೇವ್ ಪಾರ್ಟಿ ನಡೆಸಿದ್ದನ್ನು ಖಂಡಿಸಿ ಜಮಾತೆ- ಇ- ಇಸ್ಲಾಮೀ ಹಿಂದ್ ವತಿಯಿಂದ ಫೆ.10 ರಂದು ಉಡುಪಿ ತಾಲೂಕು ಕಚೇರಿ ಮುಂದೆ ನಡೆದ ಧರಣಿಯಲ್ಲಿ ಅವರು ಮಾತನಾಡುತ್ತಿದ್ದರು.
ಸದನದಲ್ಲಿ ಬ್ಲೂಫಿಲಂ ವೀಕ್ಷಿಸಿದ್ದು ಚಾರಿತ್ರ್ಯಹೀನತೆಯ ಪರಮಾವಧಿ ಎಂದ ಇದ್ರೀಸ್ ಅವರು, ಪ್ರವಾಸೋದ್ಯಮದ ಅಭಿವೃದ್ದಿಗೆ ವ್ಯಭಿಚಾರ ನಡೆಸುವ ಅಗತ್ಯವಿಲ್ಲ ಎಂದರು.
ಸಂಘಟನೆಯ ಸಲಹಾ ಸಮಿತಿ ಸದಸ್ಯರಾದ ಅಕ್ಬರ್ ಅಲಿ ಮಾತನಾಡಿ, ಬ್ಲೂಫಿಲಂ ವೀಕ್ಷಿಸಿದ ಸಚಿವರು ರಾಜಕೀಯ ಸನ್ಯಾಸ ಸ್ವೀಕರಿಸಬೇಕು ಎಂದು ಒತ್ತಾಯಿಸಿದರು. ಸುಂದರಿ ಪುತ್ತೂರು ಮಾತನಾಡಿದರು. ಹುಸೇನ್ ಕೋಡಿಬೆಂಗ್ರ ನಿರ್ವಹಿಸಿದರು.
ಕುಲ್ಸುಮ್ ಅಬೂಬಕರ್ ಉಪಸ್ಥಿತರಿದ್ದರು. ಧರಣಿಯ ಬಳಿಕ 4 ಬೇಡಿಕೆಗಳಿರುವ ಮನವಿ ಪತ್ರವನ್ನು ತಹಶಿಲ್ದಾರ್ ಮೂಲಕ ರಾಜ್ಯಪಾಲರಿಗೆ ಸಲ್ಲಿಸಲಾಯಿತು.

ಉಡುಪಿ: ಬಿಜೆಪಿ ಮತ್ತು ಸಂಘ ಪರಿವಾರವನ್ನು ದೂರುತ್ತಲೇ ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಶ್ಲೀಲತೆಗೆ ಶರಣುಹೋದರೆ, ಉಡುಪಿ ಮತ್ತು ಕಾಪು ವಿಧಾನಸಭಾ ಯುವ ಕಾಂಗ್ರೆಸ್ ಸಮಿತಿಗಳು ಮೌಢ್ಯಕ್ಕೆ ಮೊರೆಹೋಗಿದ್ದು, ಪಕ್ಷದೊಳಗೇನೇ ಹಲವಾರು ಮಂದಿ ಕಾರ್ಯಕರ್ತರ ಹಾಗೂ ಅನೇಕ ಮಂದಿ ನಾಗರಿಕರ ತೀವ್ರ ಆಕ್ರೋಶಕ್ಕೆ ಗುರಿಯಾಗಿದೆ.
ಸದನದಲ್ಲಿ ಬ್ಲೂಫಿಲಂ ವೀಕ್ಷಿಸುವಾಗ ಸಿಕ್ಕಿಬಿದ್ದವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರೆ ಸಾಲದು, ಅವರ ಶಾಸಕತ್ವವನ್ನು ರದ್ದುಪಡಿಸಬೇಕು, ಕ್ರಿಮಿನಲ್ ಕೇಸು ದಾಖಲಿಸಬೇಕು, ವಿಧಾನಸಭೆಯನ್ನು ವಿಸರ್ಜಿಸಬೇಕು ಇತ್ಯಾದಿ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಜಿಲ್ಲಾ ಕಾಂಗ್ರೆಸ್ ಸಮಿತಿಯು ಫೆ.9 ರಂದು ಉಡುಪಿ ಸರ್ವಿಸ್ ಬಸ್ ನಿಲ್ದಾಣದ ಬಳಿ ಬಹಿರಂಗ ಪ್ರತಿಭಟನಾ ಧರಣಿಯನ್ನು ಆಯೋಜಿಸಿತ್ತು.
ಧರಣಿ ನಡೆದ ವೇದಿಕೆಯಲ್ಲಿ ಬ್ಯಾನರ್ ಒಂದನ್ನು ಅಳವಡಿಸಲಾಗಿತ್ತು. ಇದರಲ್ಲಿ ಕೇವಲ ಬಿಕಿನಿ ಧರಿಸಿದ್ದ ವಿದೇಶಿ ಮಹಿಳೆಯರ ದೇಹಕ್ಕೆ ಮುಖ್ಯಮಂತ್ರಿ ಸದಾನಂದ ಗೌಡ, ಮಾಜಿ ಸಚಿವರಾದ ಲಕ್ಷ್ಮಣ ಸವದಿ, ಸಿ.ಸಿ.ಪಾಟೀಲ್, ಕೃಷ್ಣ ಜೆ.ಪಾಲೆಮಾರ್, ಶಾಸಕ ಕೆ.ರಘುಪತಿ ಭಟ್ ಹಾಗೂ ಆರ್ಎಸ್ಎಸ್ ಪ್ರಮುಖ ಕಲ್ಲಡ್ಕ ಪ್ರಭಾಕರ ಭಟ್ ಅವರ ಮುಖಗಳನ್ನು ಜೋಡಿಸಲಾಗಿತ್ತು. ಇದನ್ನು ಪ್ರದರ್ಶಿ ಅಪಹಾಸ್ಯ ಮಾಡುವ ಮೂಲಕ ತಾವೇನೋ ಸಾಹಸ ಮಾಡಿದವರಂತೆ ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಮುಖರು ಮೆರೆದು ಬೀಗಿದರು.
ಆದರೆ, ಇದೇ ಸಂದರ್ಭದಲ್ಲಿ ಪಕ್ಷದ ಹಲವಾರು ಮಂದಿ ಪ್ರಬುದ್ದ ಹಿರಿಯ ಕಾರ್ಯಕರ್ತರು, ಗೌರವಾನ್ವಿತ ಮಹಿಳೆಯರು, ಸಾರ್ವಜನಿಕರು ತೀವ್ರ ಮುಜುಗರ ಅನುಭವಿಸಿದರು. ಅನೇಕ ಮಂದಿ ಯುವತಿಯರು ತಲೆ ತಗ್ಗಿಸಿ ನಡೆಯುವಂತೆ ಮಾಡಿದರು. ಇವರೆಲ್ಲರೂ ಕಾಂಗ್ರೆಸ್ ನಾಯಕರ ಕೀಳು ಮಟ್ಟದ ಅಭಿರುಚಿಗೆ ಕನಿಕರ ಪಡುತ್ತಲೇ ಶಾಪ ಹಾಕಿದರು.
ಗುರುವಾರ ಜಿಲ್ಲಾ ಕಾಂಗ್ರೆಸ್ ಹೀಗೆ ಅಶ್ಲೀಲತೆಗೆ ಶರಣು ಹೋಗಿ ತನ್ನ ದಿವಾಳಿತನವನ್ನು ಪ್ರದರ್ಶನ ಮಾಡಿದರೆ, ಫೆ.10 ರಂದು ಉಡುಪಿ ಮತ್ತು ಕಾಪು ವಿಧಾನ ಸಭಾ ಕ್ಷೇತ್ರ ಯುವ ಕಾಂಗ್ರೆಸ್ ಸಮಿತಿಗಳು ಮಲ್ಪೆಯ ಸೈಂಟ್ ಮೇರೀಸ್ ಐಲ್ಯಾಂಡ್ ನಲ್ಲಿ ಶುದ್ದೀಕರಣದ ಹೆಸರಿನಲ್ಲಿ ಗಣಹೋಮ ನಡೆಸಿ ಮೌಢ್ಯವನ್ನು ಪ್ರದರ್ಶಿಸಿ ದೇಶದ ಸಂವಿಧಾನದ ಆಶಯಗಳಿಗೆ ವ್ಯತಿರಿಕ್ತವಾಗಿ ನಡೆದುಕೊಂಡರು.
ದೇಶದ ಜನರಲ್ಲಿರುವ ಮೌಢ್ಯವನ್ನು ಹೋಗಲಾಡಿಸಿ ವೈಚಾರಿಕ ಮನೋಭಾವವನ್ನು ಮೂಡಿಸಬೇಕೆಂಬುದು ನಮ್ಮ ದೇಶದ ಸಂವಿಧಾನದ ಮೂಲ ಆಶಯವಾಗಿದೆ. ಈ ದೇಶವನ್ನು ಅತೀ ಹೆಚ್ಚು ಕಾಲ ಆಳಿದ ಕಾಂಗ್ರೆಸ್ ಪಕ್ಷಕ್ಕೆ ಮೌಢ್ಯವನ್ನು ಹೋಗಲಾಡಿಸಲು ಸಾಧ್ಯವಾಗದಿರುವುದಕ್ಕೆ, ಮೌಢ್ಯವನ್ನು ಪ್ರತಿಪಾದಿಸುವ ನಾಯಕರು ದೊಡ್ಡ ಸಂಖ್ಯೆಯಲ್ಲಿರುವುದೇ ಮುಖ್ಯ ಕಾರಣವಾಗಿದೆ.
ಪ್ರಮೋದ್ ಮಧ್ವರಾಜ್, ರಮೇಶ್ ಕಾಂಚನ್, ಯತೀಶ್ ಕರ್ಕೇರ, ಅಬ್ದುಲ್ ಅಜೀಜ್, ನವೀನಚಂದ್ರ ಶೆಟ್ಟಿ, ವೆರೋನಿಕಾ ಕರ್ನೇಲಿಯೋ, ಸುಲೋಚನಾ ದಾಮೋದರ್, ಸರಸು ಬಂಗೇರ ಮೊದಲಾದವರು ಸೈಂಟ್ ಮೇರೀಸ್ ಐಲ್ಯಾಂಡ್ ನಲ್ಲಿ ಗಣಹೋಮ ಮತ್ತು ಶುದ್ದೀಕರಣ ಕಾರ್ಯಕ್ರಮ ನಡೆಸಿ ವಿಶೇಷ ಸಾಧನೆ ಮೆರೆದರು. ಸಂವಿಧಾನಕ್ಕೆ ಅಪಚಾರವೆಸಗಿದರು.
ಕಾಂಗ್ರೆಸ್ ಪಕ್ಷದ ಈ ಕಾರ್ಯಕ್ರಮಗಳು ಇದೀಗ ಸಾರ್ವಜನಿಕರ ಹಾಗೂ ಪಕ್ಷದ ಪ್ರಬುದ್ದ ಕಾರ್ಯಕರ್ತರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ವರದಿ: ಶ್ರೀರಾಮ ದಿವಾಣ.

ಉಡುಪಿ: ಸದನದಲ್ಲಿ ಸೆಕ್ಸ್ ಚಿತ್ರಣ ವೀಕ್ಷಣೆ ಮತ್ತು ಮಲ್ಪೆಯ ಸೈಂಟ್ ಮೇರೀಸ್ ಐಲ್ಯಾಂಡ್ ನಲ್ಲಿ ನಡೆದ ಅಶ್ಲೀಲ ರೇವ್ ಪಾರ್ಟಿಯನ್ನು ಖಂಡಿಸಿ ‘ಜಮಾತ್ – ಇ – ಇಸ್ಲಾಮಿ ಹಿಂದ್’ ಸಂಘಟನೆಯು ಫೆ.10 ರಂದು ಮಧ್ಯಾಹ್ನ ಗಂಟೆ 3.30 ಕ್ಕೆ ಉಡುಪಿ ತಾಲೂಕು ಕಚೇರಿ ಮುಂದೆ ಪ್ರತಿಭಟನಾ ಸಭೆ ಆಯೋಜಿಸಿದೆ.
ಸಭೆಯಲ್ಲಿ ಸಂಘಟನೆಯ ಸಲಹಾ ಸಮಿತಿ ಸದಸ್ಯರಾದ ಅಕ್ಬರ್ ಅಲಿ ಹಾಗೂ ಮುಹಮ್ಮದ್ ಇದರೀಸ್ ಹೂಡೆ ಅವರು ಮುಖ್ಯ ಭಾಷಣಕಾರರಾಗಿ ಭಾಗವಹಿಸಲಿದ್ದಾರೆ ಎಂದು ಸಂಘಟನೆಯ ಸ್ಥಾನೀಯ ಅಧ್ಯಕ್ಷರಾದ ಮುಹಮ್ಮದ್ ಮರಕಡ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಉಡುಪಿ: ರಾಮನ ಹೆಸರಲ್ಲಿ ಅಧಿಕಾರಕ್ಕೆ ಬಂದು ಸದನದಲ್ಲಿ ಬ್ಲೂಫಿಲಂ ವೀಕ್ಷಿಸುವ ಮೂಲಕ ಅನಾಚಾರ ನಡೆಸಿ ಕರ್ನಾಟಕದ ಮಾನವನ್ನು ಹರಾಜು ಹಾಕಿದ ಸಚಿವರುಗಳ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಜೈಲಿಗೆ ಹಾಕಬೇಕು, ಇವರ ಶಾಸಕತ್ವವನ್ನು ರದ್ದುಪಡಿಸಬೇಕು ಎಂದು ಯುವ ಜೆಡಿಎಸ್ ರಾಜ್ಯ ಸಂಘಟನಾ ಕಾರ್ಯದರ್ಶಿ ಬೆಳ್ಳಂಪಳ್ಳಿ ದಿಲೇಶ್ ಡಿ. ಶೆಟ್ಟಿ ಅವರು ಒತ್ತಾಯಿಸಿದ್ದಾರೆ.

ಯುವ ಜನತಾದಳ (ಜಾತ್ಯತೀತ) ದ ವತಿಯಿಂದ ಫೆ.8 ರಂದು ಸಂಜೆ ಹಿರಿಯಡ್ಕ ಬಸ್ ನಿಲ್ದಾಣದಲ್ಲಿ ಸಚಿವರು ಸದನದಲ್ಲಿ ಬ್ಲೂಫಿಲಂ ವೀಕ್ಷಿಸಿದ ಪ್ರಕರಣ ಮತ್ತು ಮಲ್ಪೆಯ ರೇವ್ ಪಾರ್ಟಿಯನ್ನು ಖಂಡಿಸಿ ನಡೆದ ಬಹಿರಂಗ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.
ಯುವ ಜೆಡಿಎಸ್ ನ ಜಿಲ್ಲಾಧ್ಯಕ್ಷ ವಾಸುದೇವ ರಾವ್ ಅವರು ಮಾತನಾಡುತ್ತಾ, ವಿಧಾನ ಸಭೆಯನ್ನು ವಿಸರ್ಜಿಸುವಂತೆ ಮುಖ್ಯಮಂತ್ರಿಗಳನ್ನು ಆಗ್ರಹಿಸಿದರು.

ರಂಜನ್ ಶೆಟ್ಟಿ, ರಮೇಶ್ ಶೆಟ್ಟಿ ಬೆಳ್ಳಂಪಳ್ಳಿ, ಗಿರೀಸ್ ಶೆಟ್ಟಿ, ದೇವರಾಜ್ ಹೆಜಮಾಡಿ, ರಾಘವೇಂದ್ರ ಮಡಿವಾಳ, ಶ್ರೀಧರ ಪೂಜಾರಿ, ಜಗದೀಶ ಪೂಜಾರಿ, ಸುಂದರ ಅಂಜಾರು, ರಾಜೇಶ್ ಮೂಡುಬೆಟ್ಟು, ನವೀನ್ ಮೆಂಡನ್ ಮೊದಲಾದವರು ಉಪಸ್ಥಿತರಿದ್ದರು.
ಸದನದಲ್ಲಿ ಬ್ಲೂಫಿಲಂ ವೀಕ್ಷಿಸಿದ ಸಚಿವರಾದ ಲಕ್ಷ್ಮಣ ಸವದಿ, ಸಿ.ಸಿ.ಪಾಟೀಲ್ ಹಾಗೂ ಕೃಷ್ಣ ಜೆ. ಪಾಲೇಮಾರ್ ಇವರ ಪ್ರತಿಕೃತಿಗಳನ್ನು ಪ್ರತಿಭಟನಾಕಾರರು ಸಾರ್ವಜನಿಕವಾಗಿ ದಹಿಸಿ, ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ವೇಶ್ಯಾವಾಟಿಕೆಗೆ ಪ್ರೋತ್ಸಾಹ ನೀಡಿದ ರಾಜ್ಯ ಸರಕಾರಕ್ಕೆ, ಮದಿರೆ, ಗಾಂಜಾ ಸಪ್ಲೈ ಮಾಡಿದ ಸರಕಾರಕ್ಕೆ, ಬ್ಲೂಫಿಲಂ ನೋಡಿದ ಸಚಿವರಿಗೆ ಪ್ರತಿಭಟನಾಕಾರರು ಧಿಕ್ಕಾರ ಕೂಗಿದರು.

ಉಡುಪಿ: ಮಲ್ಪೆಯ ಸೈಂಟ್ ಮೇರೀಸ್ ಐಲ್ಯಾಂಡಲ್ಲಿ ಪ್ರವಾಸೋದ್ಯಮದ ಅಭಿವೃದ್ದಿ ಎಂಬ ಹೆಸರಲ್ಲಿ ಕಾಮಕೇಳಿ, ಮದ್ಯ ಸೇವನೆ, ಡ್ರಗ್ ಎಡಿಕ್ಷನ್, ಅರೆ ಬೆತ್ತಲೆ ತಾಂಡವ ನರ್ತನ ಇತ್ಯಾದಿಗಳೆಲ್ಲವೂ ನಡೆಯಿತು. ಮಾಧ್ಯಮಗಳು ಸತ್ಯವನ್ನು ಬಿಂಬಿಸಿವೆ. ಈ ರೇವ್ ಪಾರ್ಟಿಗೆ 6000 ಜನ ಸೇರಿದ್ದರು. ಇವರಲ್ಲಿ 400 ಮಂದಿ ವಿದೇಶಿಯರು. ಆದರೆ, ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡರು ಯಾವುದೇ ಅಹಿತಕರ ಘಟನೆಗಳೂ ನಡೆದಿಲ್ಲ ಅನ್ನುತ್ತಾರೆ, ಮಾಧ್ಯಮಗಳಲ್ಲಿ ಬಂದಂತೆ ಏನೂ ನಡೆದಿಲ್ಲ ಅಂತಾರೆ. ಮುಖ್ಯಮಂತ್ರಿಗಳ ಕೈಕೆಳಗೆ ಇಂಟೆಲಿಜೆಂಟ್ಸ್ ಇದೆ, ಜಿಲ್ಲಾಡಳಿತ ಇದೆ. ಇಷ್ಟೆಲ್ಲಾ ಇದ್ದೂ ಏನೂ ಆಗಿಲ್ಲವೆಂದು ಹೇಳಿಕೆ ನೀಡಿ ಜನರನ್ನು ಮೋಸ ಮಾಡುತ್ತಿದ್ದಾರೆ ಮುಖ್ಯಮಂತ್ರಿ. ಮೋಸ ಮಾಡುವುದನ್ನೆ ಕೆಲಸ ಮಾಡಿಕೊಂಡಿರುವ, ರಾಜ್ಯಭಾರ ಮಾಡಲು ಗೊತ್ತಿಲ್ಲದ ಸದಾನಂದ ಗೌಡರು ಕುರ್ಚಿ ಬಿಟ್ಟು ಕೆಳಗಿಳಿಯಲಿ ಎಂದು ಕಾಂಗ್ರೆಸ್ ನಾಯಕ, ಮಾಜೆ ಕೇಂದ್ರ ಸಚಿವ ಬಿ.ಜನಾರ್ದನ ಪೂಜಾರಿಯವರು ಹೇಳಿದರು.
ಉಡುಪಿ ಪ್ರೆಸ್ ಕ್ಲಬ್ ನಲ್ಲಿ ಮಂಗಳವಾರ ನಡೆಸಿದ ಮಾಧ್ಯಮಗೊಷ್ಟಿಯಲ್ಲಿ ಮಾತನಾಡುತ್ತಿದ್ದ ಅವರು, ಮಾತೃ ದೇವೋಭವ, ಭಾರತ ಮಾತೆ ಇತ್ಯಾದಿ ಹೇಳುತ್ತಾ, ದ್ವೀಪದ ಪವಿತ್ರತೆಯನ್ನು, ಸಂಸ್ಕೃತಿಯನ್ನು ಧ್ವಂಸ ಮಾಡಿ ಅಕ್ಷಮ್ಯ ಅಪರಾಧವೆಸಗಲಾಗಿದೆ. ಇದಕ್ಕಾಗಿ ಸದಾನಂದ ಗೌಡರಿಗೆ ಶಹಬ್ಬಾಸ್ ಗಿರಿ ಕೊಡಬೇಕು ಎಂದು ವ್ಯಂದ್ಯವಾಡಿದರು.
ಪ್ರವಾಸೋದ್ಯಮದ ಅಭಿವೃದ್ದಿಗೆ ಅರೆ ಬೆತ್ತಲೆ ನೃತ್ಯ ನಡೆಸಿ ಹಣ ಸಂಗ್ರಹಿಸಬೇಕೇ, ಸರಕಾರದಲ್ಲಿ ಹಣ ಇಲ್ಲವೇ ಎಂದು ಪ್ರಶ್ನಿಸಿದ ಜನಾರ್ಧನ ಪೂಜಾರಿಯವರು, ರೇವ್ ಪಾರ್ಟಿಯಲ್ಲಿ ಇಷ್ಟೆಲ್ಲಾ ನಡೆಯುತ್ತಿರುವಾಗ ಡಿಸಿ ಮಲಗಿದ್ರಾ, ಸರಕಾರ ನಿದ್ದೆ ಮಾಡ್ತಿತ್ತಾ ಎಂದು ಚಾಟಿ ಬೀಸಿದರು.
ಇದನ್ನು ಸುಮ್ಮನೇ ಬಿಡುವುದಿಲ್ಲ. ಸೂಕ್ತ ಕ್ರಮ ಕೈಗೊಳ್ಳದೇ ಇದ್ದಲ್ಲಿ ಬರಲಿರುವ ಉಡುಪಿ – ಚಿಕ್ಕ ಮಗಳೂರು ಲೋಕಸಭಾ ಕ್ಷೇತ್ರಕ್ಕೆ ನಡೆಯಲಿರುವ ಮರು ಚುನಾವಣೆಗೆ ಚುನಾವಣಾ ವಿಷಯವಾಗಲಿದೆ ಎಂದು ಮುನ್ನೆಚ್ಚರಿಕೆ ನೀಡಿದರು. ರೇವ್ ಪಾರ್ಟಿ ನಡೆಯುತ್ತಿರುವಾಗ ಮುಖ್ಯಮಂತ್ರಿಗಳು ಉಡುಪಿಗೆ ಆಗಮಿಸಿದ್ದಾರೆ, ಕೇವಲ 8 ಕಿ.ಮೀ.ದೂರದ ಐಲ್ಯಾಂಡ್ ಗೆ ಹೋಗಿ ನೋಡುತ್ತಿದ್ದರೆ ಮುಖ್ಯಮಂತ್ರಿಗಳಿಗೆ ಅಲ್ಲೇನು ನಡೆಯುತ್ತಿತ್ತು ಎಂದು ಗೊತ್ತಾಗುತ್ತಿತ್ತು. ಐಲ್ಯಾಂಡ್ ಗೆ ಡ್ರಗ್ ಸಪ್ಲೈ ಮಾಡಿದ್ದು ಯಾರು, ಸಂಗ್ರಹವಾದ ಹಣವೆಷ್ಟು ಇತ್ಯಾದಿಗಳಿಲ್ಲವನ್ನೂ ಸರಕಾರ ಸಾರ್ವಜನಿಕರಿಗೆ ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದರು.
ಮಾಧ್ಯಮಗೋಷ್ಟಿಯಲ್ಲಿ ಕಾಂಗ್ರೆಸ್ ಮುಖಂಡರುಗಳಾದ ಹರಿಕೃಸ್ಣ ಬಂಟ್ವಾಳ, ಎಂ.ಎ.ಗಫೂರ್, ಕೀರ್ತಿ ಶೆಟ್ಟಿ, ಸರಳಾ ಕಾಂಚನ್ ಮೊದಲಾದವರು ಉಪಸ್ಥಿತರಿದ್ದರು.

ಉಡುಪಿ: ಉಡುಪಿಯ ಬಿಜೆಪಿ ಶಾಸಕ ರಘುಪತಿ ಭಟ್ಟರಿಗೆ ಸ್ವಲ್ಪ ಆದ್ರೂ ನಾಚಿಕೆ, ಮಾನ, ಮರ್ಯಾದೆ ಇದ್ದದ್ದೇ ಆದಲ್ಲಿ ಶಾಸಕ ಸ್ಥಾನಕ್ಕೆ ಇನ್ನಾದರೂ ರಾಜೀನಾಮೆ ಕೊಡಲಿ ಎಂದು ಜೆಡಿಎಸ್ ರಾಜ್ಯ ಕಾರ್ಯದರ್ಶಿ ಎಂ.ಜಿ.ಹೆಗಡೆ ಅವರು ಸವಾಲೊಡ್ಡಿದ್ದಾರೆ.
ಮಲ್ಪೆ ಸೈಂಟ್ ಮೇರೀಸ್ ಐಲ್ಯಾಂಡ್ ನಲ್ಲಿ ಪ್ರವಾಸೋದ್ಯಮದ ಅಭಿವೃದ್ದಿಗಾಗಿ ಎಂಬ ನೆಪ ಮುಂದಿಟ್ಟುಕೊಂಡು ಮೂರು ದಿನಗಳ ಕಾಲ ಹಗಲು – ರಾತ್ರಿ ನಡೆಸಿದ ಮುಕ್ತ ಕಾಮಕೇಳಿ ಸಹಿತವಾದ ರೇವ್ ಪಾರ್ಟಿಯನ್ನು ಖಂಡಿಸಿ ಜೆಡಿಎಸ್ ಪಕ್ಷದ ಉಡುಪಿ ಜಿಲ್ಲಾ ಸಮಿತಿಯ ವತಿಯಿಂದ ಮಂಗಳವಾರ ಉಡುಪಿ ಸರ್ವಿಸ್ ಬಸ್ ನಲ್ದಾಣದ ಬಳಿ ನಡೆದ ಬಹಿರಂಗ ಪ್ರತಿಭಟನಾ ಸಬೆಯಲ್ಲಿ ಮುಖ್ಯ ಭಾಷಣಕಾರರಾಗಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಶಾಸಕರ ಕೃಪಾಪೋಷಿತ ರೇವ್ ಪಾರ್ಟಿಯನ್ನು ಜಿಲ್ಲಾಧಿಕಾರಿಗಳು ನೋಡಿಕೊಂಡಿದ್ದಾರೆ. ಈ ಡಿಸಿಗೆ ತಲೆ ಏನಾದ್ರೂ ಇದೆಯ ಎಂದು ಪ್ರಶ್ನಿಸಿದ ಹೆಗಡೆ, ಡಿಸಿ ಕೂಡಲೇ ವರ್ಗಾವಣೆ ತೆಗೆದುಕೊಂಡು ಎಲ್ಲಾದರು ಹೋಗಲಿ ಎಂದು ಹೇಳಿದರು.
ರೇವ್ ಪಾರ್ಟಿ ಹೆಸರಲ್ಲಿ ಡಿಸಿ, ಎಸ್ಪಿ, ಎಂಎಲ್ಎ ಹೊಡೆದ ಹಣವೆಷ್ಟು ಎಂಬ ಲೆಕ್ಕಾಚಾರ ಬಹಿರಂಗವಾಗಬೇಕು ಎಂದು ಒತ್ತಾಯಿಸಿದ ಹೆಗಡೆ, ಜಿಲ್ಲಾಧಿಕಾರಿ ಅಸಮರ್ಥ ಮತ್ತು ಅಯೋಗ್ಯ ಎಂದು ಟೀಕಿಸಿದರು.
ರಘುಪತಿ ಭಟ್ರು ಇನ್ನಾದರೂ ಮಧ್ವ ಸರೋವರದಲ್ಲಿ ಸ್ನಾನ ಮಾಡಿ ರೇವ್ ಪಾರ್ಟಿಯ ಪಾಪವನ್ನು ತೊಳೆದುಕೊಳ್ಳಲಿ ಎಂದು ವ್ಯಂಗ್ಯವಾಡಿದ ಹೆಗಡೆ ಅವರು, ಮಧ್ವ ಸರೋವರವನ್ನು ತೀರ್ಥ ಹಾಕಿ ಶುದ್ದೀಕರಣ ಮಾಡಿದರಾಯಿತು ಎಂದು ಹೇಳಿದರು.
ನೈತಿಕ ಪೋಲೀಸ್ ಗಿರಿ ನಡೆಸುವ ದುರ್ಗಾವಾಹಿನಿ, ಬಜರಂಗದಳ, ಯುವ ಮೋರ್ಛಾ, ಕಲ್ಲಡ್ಕ ಭಟ್ಟರು ಮುಂತಾದ ವರೆಲ್ಲರೂ ಈಗ ಎಲ್ಲಿ ಅಡಗಿ ಕುಳಿತಿದ್ದಾರೆ. ಹೊರಗೆ ಬನ್ನಿ ಎಂದು ಸವಾಲು ಹಾಕಿದರು.
ಮಾಧ್ಯಮಗೋಷ್ಟಿಯಲ್ಲಿ ಹರಿಕೃಷ್ಣ ಬಂಟ್ವಾಳ್, ಎಂ.ಎ.ಗಫೂರ್, ಸರಳಾ ಕಾಂಚನ್ ಮೊದಲಾದವರು ಉಪಸ್ಥತರಿದ್ದರು.