Posts Tagged ‘bajet’

ಉಡುಪಿ: ಕೇಂದ್ರ ಮತ್ತು ರಾಜ್ಯ ಸರಕಾರ ಮಂಡಿಸಿದ ಜನ ವಿರೋಧಿ ಬಜೆಟ್ ನ್ನು ಖಂಡಿಸಿ ಎ.12 ರಂದು ಸಂಜೆ ಉಡುಪಿ ಸರ್ವಿಸ್ ಬಸ್ ನಿಲ್ದಾಣದ ಪಕ್ಕದ ಮಹಾತ್ಮಾ ಗಾಂಧಿ ಪ್ರತಿಮೆ ಮುಂಭಾಗದಲ್ಲಿ ಸಿಪಿಐಎಂ ಪಕ್ಷದ ಉಡುಪಿ ತಾಲೂಕು ಸಮಿತಿ ವತಿಯಿಂದ ಪ್ರತಿಭಟನಾ ಪ್ರದರ್ಶನ ನಡೆಯಿತು.
ಪಕ್ಷದ ತಾಲೂಕು ಕಾರ್ಯದರ್ಶಿ ಪಿ.ವಿಶ್ವನಾಥ ರೈ, ಜಿಲ್ಲಾ ಸಮಿತಿ ಸದಸ್ಯ ಎಚ್.ವಿಠಲ ಪೂಜಾರಿ, ಇತರ ನಾಯಕರುಗಳಾದ ದೋಗು ಸುವರ್ಣ, ಕೆ.ಲಕ್ಷ್ಮಣ, ಅದಮಾರು ಶ್ರೀಪತಿ ಆಚಾರ್ಯ, ವಾದಿರಾಜ ಬುದ್ಯ, ಗೋಡ್ವಿನ್ ಫೆರ್ನಾಂಡಿಸ್, ಕೆ.ವಿಶ್ವನಾಥ ಮೊದಲಾದವರು ಪ್ರತಿಭಟನಾ ಪ್ರದರ್ಶನದ ನೇತೃತ್ವ ವಹಿಸಿದ್ದರು. ಚಿತ್ರ: ಶ್ರೀರಾಮ ದಿವಾಣ.